ಇಶ್ರತ್ ಜಹಾನ್ ಮಾನವ ಬಾಂಬ್ ಆಗಿದ್ದಳು ಎಂದು ಉಗ್ರ ಡೇವಿಡ್ ಹೇಡ್ಲಿ ಬಾಯ್ಬಿಟ್ಟ ಬಳಿಕ ಇಹ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಸ್ಪೋಟಕ ಮಾಹಿತಿಗಳು ಹೊರಬರಲು ಆರಂಭವಾಗಿವೆ. ಮಾಜಿ ಗುಪ್ತಚರ ಇಲಾಖೆ ವಿಶೇಷ ನಿರ್ದೇಶಕ ರಾಜಿಂದರ್ ಕುಮಾರ್ ಅವರೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ. 2004 ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಯವರನ್ನು ಸಿಲುಕಿಸುವಂತೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನಿವೃತ್ತರಾಗಿರುವ 1979ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಕುಮಾರ್, ಎನ್ಕೌಂಟರ್ ಪ್ರಕರಣದಲ್ಲಿ ಮೋದಿಯವರ ವರ್ಚಸ್ಸನ್ನು ಹಾಳುಗೆಡವಲು ರೂಪಿಸಿದ ಪಿತೂರಿಯ ಮಾಸ್ಟರ್ ಮೈಂಡ್ ಗುಜರಾತ್ನ ಹಿರಿಯ ಕಾಂಗ್ರೆಸ್ ನಾಯರೊಬ್ಬರಾಗಿದ್ದರು ಎಂದು ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.