ಅಲಹಾಬಾದ್ನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದ ಬಿಜೆಪಿ ಕೆಲವು ರಾಜಕೀಯ ನಿರ್ಣಯಗಳನ್ನು ತೆಗೆದುಕೊಂಡಿತು. ಈ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಡ ಪಕ್ಷದ ಮೇಲೆ ಆರೋಪದ ಸುರಿಮಳೆಗೈದ ಬಿಜೆಪಿ ಇವೆರಡು ಪಕ್ಷಗಳು ಕೇವಲ ಕ್ಷುಲ್ಲಕ ವಿಷಯಗಳಲ್ಲಿ ಮುಳುಗಿರುತ್ತವೆ ಹೊರತು ಅದರಿಂದ ಹೊರಬರುವುದಿಲ್ಲ. ಇದು ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಕಿಡಿಕಾರಿದೆ.