ಅಲ್ಲಿ ಅವರು ಟೇಬಲ್ ಒರೆಸುವ ಕೆಲಸವನ್ನು ಮಾಡುತ್ತಿದ್ದರು.ಅನಕ್ಷರಸ್ಥರಾಗಿರುವ ಅವರಿಗೆ ಸಚಿವೆ ಪದವಿ ಪಡೆಯುವ ಅರ್ಹತೆ ಇಲ್ಲ. ಆದರೆ ಪ್ರಧಾನಿ ಮೋದಿಯವರು ಸ್ವ ಹಿತಾಸಕ್ತಿಯಿಂದ ಅವರನ್ನು ಸಚಿವೆ ಪದವಿಗೇರಿಸಿದ್ದಾರೆ. ಅವರು ದೆಹಲಿಯಿಂದ ಬಂದು ಮುಂಬೈನಲ್ಲಿ ನೆಲಸಿದ್ದಾರೆ. ಮುಂಬೈನ ಹೋಟೆಲ್ಗಳಲ್ಲಿ ನೆಲ ಒರೆಸಿದ್ದುದು ಅವರು ನಿರ್ವಹಿಸಿದ ಮೊದಲ ಉದ್ಯೋಗ. ಅದರಲ್ಲೇನೂ ತಪ್ಪಿಲ್ಲ. ಚಹಾ ಮಾರಾಟ ಮಾಡುವವವನು ಪ್ರಧಾನಿಯಾಗುತ್ತಾನೆಂದರೆ ನೆಲ ಒರೆಸುವವಳು ಸಚಿವೆಯಾಗಲು ಸಾಧ್ಯವಿಲ್ಲವೇ ಎಂದು ಹಗುರವಾಗಿ ಮಾತನಾಡಿದ್ದರು.