ಬಿಜೆಪಿ, ಪ್ರಧಾನಿ ಮೋದಿ ಮತ್ತು ಸಿಂಗ್ ವಿರುದ್ಧ ಘೋಷಣೆ ಕೂಗುತ್ತ ವಿಠ್ಠಲ್ ಭಾಯಿ ಪಟೇಲ್ ಹೌಸ್ ಸಂಕೀರ್ಣದ ಮುಂದೆ ನೆರೆದ ಕಾಂಗ್ರೆಸ್ ಕಾರ್ಯಕರ್ತರು ಸಿಂಗ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಆದರೆ ಸಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದರು.
ಸಿಂಗ್ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಓಝಾ," ಸಚಿವರಾಗಿ ಇಂತಹ ಭಾಷೆ ಬಳಸಿರುವುದು ಸ್ವೀಕಾರಾರ್ಹವಲ್ಲ, ಇದಕ್ಕೆ ಪ್ರತಿಯಾಗಿ ಗಿರಿರಾಜ್ ರಾಜೀನಾಮೆಯನ್ನು ಹೊರತು ಪಡಿಸಿ ನಾವೇನನ್ನು ಬಯಸುವುದಿಲ್ಲ", ಎಂದಿದ್ದಾರೆ.