ಗೋಮಾಂಸ ಸೇವನೆ ಮಾಡಿದ್ದಾನೆ ಎನ್ನುವ ಉಹಾಪೋಹಗಳ ಹಿನ್ನೆಲೆಯಲ್ಲಿ ದಾದ್ರಿ ಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೆಲ ವಿಚ್ಚಿದ್ರಕಾರಿ, ಕೋಮುವಾದಿ ಶಕ್ತಿಗಳು ಸರಕಾರಕ್ಕೆ ಕೆಟ್ಟ ಹೆಸರನ್ನು ತರುವ ರಾಜಕೀಯ ಸಂಚು ನಡೆಸುತ್ತಿವೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೋಮುಗಲಭೆ ಹಬ್ಬಿಸಲು ಸಂಚು ನಡೆದಿದೆ. ಇಂತಹ ಸಂಚು ವಿಫಲಗೊಳಿಸಲು ನಾವು ಎಚ್ಚರಿಕೆಯಿಂದಿರಬೇಕು ಎಂದು ಮಧ್ಯಮ, ಸಣ್ಣ ಮತ್ತು ಮೈಕ್ರೋ ಎಂಟರ್ಪ್ರೈಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಅಖಿಲೇಶ್ ಯಾದವ್ ಜನತೆಗೆ ಮನವಿ ಮಾಡಿದ್ದಾರೆ.