ಉಂಡೆ ಅನುಮತಿ ಪಡೆಯದೇ ಗೈರು ಹಾಜರಾಗಿದ್ದರು. ಆದ್ದರಿಂದ ಸಬ್ಇನ್ಸಪೆಕ್ಟರ್ ರಘುವೀರ್ ಸಿಂಗ್ ಠಾಕೂರ್ ನಿಯಮದಂತೆ ಹಾಜರಿ ಪುಸ್ತಕದಲ್ಲಿ ಗೈರು ಎಂದು ಗುರುತು ಮಾಡಿದ್ದಾರೆ. ಮರುದಿನ ಠಾಣೆಗೆ ಹಾಜರಾದ ಉಂಡೆ ಹಾಜರಿ ಪುಸ್ತಕದಲ್ಲಿ ತಮ್ಮ ಹೆಸರಿನ ಮುಂದೆ ಗೈರು ಎಂದು ಬರೆದಿದ್ದುದನ್ನು ನೋಡಿ ಕೋಪಗೊಂಡಿದ್ದಾನೆ. ನೇರವಾಗಿ ಠಾಕೂರ್ ಮನೆಗೆ ತೆರಳಿ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.