ಅಂತರ್ಧರ್ಮೀಯ ವಿವಾಹವಾದ ಐದು ಜೋಡಿಗಳು ತಮ್ಮ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರ್ವಾನಿ ಈ ತೀರ್ಪನ್ನು ನೀಡಿದ್ದಾರೆ .ಮುಸ್ಲಿಂ ಧರ್ಮದಲ್ಲಿ ಬದ್ಧತೆ ಮತ್ತು ನಂಬಿಕೆ ಇಲ್ಲದೆ, ಕೇವಲ ಆ ಧರ್ಮದ ಯುವಕನನ್ನು ಮದುವೆಯಾದ ಕಾರಣಕ್ಕೆ ಧರ್ಮ ಪರಿವರ್ತನೆ ಮಾಡಿಕೊಳ್ಳುವುದನ್ನು ಕಾನೂನು ಒಪ್ಪುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.