ಮೂಲಗಳ ಪ್ರಕಾರ ನಾರಾಯಣ ಪುರ ಗ್ರಾಮದಲ್ಲಿ 12 ಡಕಾಯಿತರು ಶಾಹಿದ್ ಹೆಸರಿನ ಒಬ್ಬ ವ್ಯಕ್ತಿಯ ಮನೆಯೊಳಗಡೆ ನುಸುಳಿ ಪರಿವಾರದ ಎಲ್ಲಾ ಸದಸ್ಯರನ್ನು ಬಂಧಿಸಿ ಅವರಿಂದ 20,000 ನಗದು ಹಣ , 1.5 ಲಕ್ಷ ರೂಪಾಯಿಯ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಲೂಟಿ ಹೊಡೆದಿದ್ದಾರೆ. ಇದರ ನಂತರ ಡಕಾಯಿತರು ಆ ಮನೆ ಮಾಲಿಕ ಶಾಹಿದ್ನ ಹೆಂಡತಿಯನ್ನು ಹತ್ತಿರದ ಒಂದು ಹೊಲಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.