ದಾದ್ರಿ ತರಹದ ಘಟನೆಗಳು ಬಿಜೆಪಿ, ಎನ್‌ಡಿಎಗೆ ಮಾರಕ: ಪರಿಕ್ಕರ್

ಸೋಮವಾರ, 12 ಅಕ್ಟೋಬರ್ 2015 (16:36 IST)
ಕಳೆದ ಭಾನುವಾರ ಸಾರ್ವಜನಿಕ ಸಮಾಲೋಚನೆಯಲ್ಲಿ ತೊಡಗಿದ್ದ ಪರಿಕ್ಕರ್ ಕೆಲವು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಇಂತಹ ಘಟನೆಗಳನ್ನು ವೈಭವೀಕರಿಸುತ್ತವೆ ಎಂದು ಅವರು ಆರೋಪಿಸಿದ್ದಾರೆ.
 
ಗೋಮಾಂಸ ಸೇವಿಸಿದ್ದಾರೆಂದು ಆರೋಪಿಸಿ ದಾದ್ರಿ ಗ್ರಾಮದ ಮೊಹಮ್ಮದ್ ಅಖಲಕ್ ಹತ್ಯೆ ಕುರಿತಂತೆ ಪ್ರಧಾನಿ ಮೋದಿಯವರು ಯಾವುದೇ ಪ್ರತಿಕ್ರಿಯೆಯನ್ನು ನೀಡದಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಪರಿಕ್ಕರ್ ಈ ಹೇಳಿಕೆಯನ್ನು ನೀಡಿದ್ದಾರೆ. 
 
'ನನ್ನ ಪ್ರಕಾರ ಇಂತಹ ಘಟನೆಗಳು ಬಿಜೆಪಿ ಮತ್ತು ಎನ್‌ಡಿಎಗೆ ಹಾನಿಕರ. ಇದು  ಪ್ರಧಾನಿಯವರು ಹೊಂದಿರುವ ಕನಸಿಗೂ ಮಾರಕವಾದುದು', ಎಂದು ಪರಿಕ್ಕರ್ ದಾದ್ರಿ ಘಟನೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ