ದಲಿತ ಯುವತಿಯನ್ನು ನಗ್ನಗೊಳಿಸಿ ಗ್ರಾಮದ ಸುತ್ತ ಮೆರವಣಿಗೆ ಮಾಡಿಸಿದ ಆರೋಪಿಗಳು

ಮಂಗಳವಾರ, 16 ಫೆಬ್ರವರಿ 2016 (14:59 IST)
ಹದಿಹರೆಯದ ದಲಿತ ಯುವತಿಯ ತಲೆ ಬೋಳಿಸಿ, ನಗ್ನಗೊಳಿಸಿ, ಆಕೆಗೆ ಚಪ್ಪಲಿಯ ಹಾರಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ ಹೇಯ ಘಟನೆ ವರದಿಯಾಗಿದೆ.
 
ಇಟ್ಟಿಗೆ ತಯಾರಿಕೆ ಕಾರ್ಖಾನೆ ಮಾಲೀಕ ಹಾಗೂ ಆತನ ಇಬ್ಬರು ಉದ್ಯೋಗಿಗಳು, ಯುವತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಅಮಾನುಷ ವರ್ತನೆ ತೋರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪುತ್ರಿಯ ಮೇಲೆ ನಡೆದ ದೌರ್ಜನ್ಯದಿಂದ ಆಘಾತಗೊಂಡ ಆಕೆಯ ತಂದೆ ಪೊಲೀಸ್ ಠಾಣೆಗೆ ತೆರಳಿ, ಇಟ್ಟಿಗೆ ಕಾರ್ಖಾನೆ ಮಾಲೀಕ ಹಾಗೂ ಆತನ ಇಬ್ಬರು ಉದ್ಯೋಗಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
 
ಇಟ್ಟಿಗೆ ಕಾರ್ಖಾನೆ ಪಕ್ಕದಲ್ಲಿ ನಮ್ಮ ಪಿತ್ರಾರ್ಜಿತ ಭೂಮಿಯಿರುವುದರಿಂದ ಅದನ್ನು ಕಬಳಿಕೆ ಮಾಡಲು ಇಟ್ಟಿಗೆ ಮಾಲೀಕ ನಿರಂತರವಾಗಿ ತಮ್ಮ ಕುಟುಂಬದ ಮೇಲೆ ದೌರ್ಜನ್ಯವೆಸಗುತ್ತಿದ್ದಾನೆ ಎಂದು ಯುವತಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
 
ಆರೋಪಿ ವಿರೇಂದ್ರ ಕುಮಾರ್ ಮಿಶ್ರಾ ಮತ್ತು ಆತನ ಇಬ್ಬರು ಉದ್ಯೋಗಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ