ಕಳೆದ 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದ ನಂತರ ದಾವೂದ್ ಇಬ್ರಾಹಿಂ ಗ್ಯಾಂಗ್ ತೊರೆದು ಪ್ರತ್ಯೇಕ ತಂಡ ಕಟ್ಟಿದ್ದ ಚೋಟಾ ರಾಜನ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವುದು ಪೊಲೀಸರಿಗೆ ಶರಣಾಗಲು ಮೂಲಕಾರಣವಾಗಿದೆ ಎನ್ನಲಾಗಿದೆ. ಗ್ಯಾಂಗ್ನಿಂದ ಬೇರೆಯಾದ ನಂತರದಿಂದ ರಾಜನ್ ಹತ್ಯೆಗೆ ಶಕೀಲ್ ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ.
ಎರಡು ತಿಂಗಳುಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ ರಾಜನ್ ಮೇಲೆ, ಶಕೀಲ್ ಬೆಂಬಲಿಗರು ಹತ್ಯೆಯತ್ನ ಮಾಡಿದ್ದರು. ಆದರೆ, ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡ ರಾಜನ್ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದ.