ಶರ್ಮಾ ಮೇಲೆ ತಾನು ಸತ್ತಿದ್ದೇನೆ ಎಂದು ಬಿಂಬಿಸುವ ನಕಲಿ ಸನ್ನಿವೇಶವನ್ನು ಸೃಷ್ಟಿಸಿದ ಆರೋಪವಿದೆ. ಆಪ್ ಸದಸ್ಯ ನೇಪಾಳದಲ್ಲಿ ಇದ್ದಾರೆ ಎಂದು ಪೋಲಿಸರಿಗೆ ಮಾಹಿತಿ ಬಂದಿತ್ತು ಮತ್ತು ಅವರು ಬೆಂಗಳೂರಿನಲ್ಲಿರುವ ಬಗ್ಗೆ ಕುರುಹು ಕೂಡ ಲಭಿಸಿತ್ತು. ಆ ಕಾರಣ ಕರ್ನಾಟಕ, ನೇಪಾಳ ಮತ್ತು ಗಡಿ ಪ್ರದೇಶಗಳಲ್ಲಿ ಪೋಲಿಸ್ ತಂಡ ಕಾರ್ಯತತ್ಪರವಾಯಿತು.