ಸಂವಾದ ಕಾರ್ಯಕ್ರಮ: ಬೆಂಗಳೂರು ವಿದ್ಯಾರ್ಥಿ ಆತ್ಮಿಕ್ ಆರೋಗ್ಯ ವಿಚಾರಿಸಿದ ಮೋದಿ

ಶುಕ್ರವಾರ, 4 ಸೆಪ್ಟಂಬರ್ 2015 (11:44 IST)
ನಾಳೆ ಶಿಕ್ಷಕರ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಮಾಣಿಕ್ ಶಾ ಹಾಲ್‌ನಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಿದ್ದು, ನಮ್ಮ ಉದ್ಯಾನನಗರಿ ಬೆಂಗಳೂರಿನ ವಿದ್ಯಾರ್ಥಿ ಆತ್ಮಿಕ್ ಪ್ರಶ್ನೆಗೆ ಉತ್ತರಿಸಿದ್ದಲ್ಲದೆ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. 
 
ದಿನಾಚರಣೆ ಹಿನ್ನೆಲೆಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಬೆಂಗಳೂರಿನ ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಆತ್ಮಿಕ್ ಕೂಡ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಆತ್ಮಿಕ್ ಪ್ರಶ್ನೆ ಕೇಳಿದ್ದು, ಉತ್ತರವನ್ನೂ ಪಡೆದಿದ್ದಾರೆ.
 
ಆತ್ಮಿಕ್ ಪ್ರಶ್ನೆ: ರಾಷ್ಟ್ರದಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಂದಿನ ಯುವಕರು ಶಿಕ್ಷಕರಾಗಿ ಕಾರ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸಲು, ವಿದ್ಯಾರ್ಥಿಗಳನ್ನು ಶಿಕ್ಷಕ ವೃತ್ತಿಯತ್ತ ಕರೆತರಲು ನಿಮ್ಮ ಪ್ರಯತ್ನಗಳೇನು ?
 
ಮೋದಿ ಉತ್ತರ: ರಾಷ್ಟ್ರದಲ್ಲಿ ಉತ್ತಮ ಶಿಕ್ಷಕರ ಕೊರತೆ ಇಲ್ಲ. ರಾಷ್ಟ್ರದೆಲ್ಲೆಡೆ ಸಾಕಷ್ಟು ಮಂದಿ ಉತ್ತಮ ಶಿಕ್ಷಕರಿದ್ದಾರೆ. ಅಲ್ಲದೆ ಶಿಕ್ಷಕ ವೃತ್ತಿಗೆ ಸಾಕಷ್ಟು ಮಂದಿ ಹಾತೊರೆಯುತ್ತಿದ್ದಾರೆ ಎಂದ ಮೋದಿ, ನಿನ್ನ ಆರೋಗ್ಯ ಹೇಗಿದೆ ಎಂದು ವಿಚಾರಿಸಿದರು. 

ವೆಬ್ದುನಿಯಾವನ್ನು ಓದಿ