ಭೂಗತ ದೊರೆ ದಾವೂದ್ ಇಬ್ರಾಹಿಂ ಫೋನ್ ಕರೆಗಳು ಮತ್ತು ಅಕ್ರಮ ಭೂ ಕಬಳಿಕೆ ಭೂ ಹಗರಣದಲ್ಲಿ ಸಿಲುಕಿರುವ ಏಕನಾಥ್ ಖಾಡ್ಸೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೋರಿದರು ಅವರ ಕೋರಿಕೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಖಾಡ್ಸೆ ಹಗರಣ ಕುರಿತಂತೆ ವರದಿ ನೀಡುವಂತೆ ಸಿಎಂ ಫಡ್ನವೀಸ್ಗೆ ಆದೇಶ ನೀಡಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಹೊಣೆ ಹೊತ್ತಿರುವ ಸರೋಜ್ ಪಾಂಡೆ, ಮೂರು ದಿನಗಳ ಹಿಂದೆ ಖಾಡ್ಸೆಯವರನ್ನು ಭೇಟಿ ಮಾಡಿ ಹಗರಣಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವಂತೆ ಕೋರಿದ್ದರು. ತದನಂತರ ಮೋದಿ, ಶಾ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.