ಪ್ಯಾರಿಸ್ ಉಗ್ರರ ದಾಳಿಯಲ್ಲಿ ಮೃತರಾದವರಿಗಾಗಿ ಶೃದ್ದಾಂಜಲಿ ಅರ್ಪಿಸುವುದರೊಂದಿಗೆ ಚಳಿಗಾಲದ ಅಧಿವೇಶನ ಆರಂಭವಾಯಿತು. ತದನಂತರ ವಿಪಕ್ಷ ನಾಯಕ ವಿಜೇಂದರ್ ಗುಪ್ತಾ, ವಿಎಚ್ಪಿ ನಾಯಕ ಸಿಂಘಾಲ್ ಅವರಿಗೆ ಶೃದ್ದಾಂಜಲಿ ಅರ್ಪಿಸುವಂತೆ ಸದನದ ಮುಂದೆ ಬೇಡಿಕೆಯಿಟ್ಟರು.
ಅಧಿಕಾರರೂಢ ಶಾಸಕರಾದ ಜಗದೀಪ್ ಸಿಂಗ್, ಅಮಾನುತುಲ್ಲಾ ಖಾನ್, ಸೋಮನಾಥ್ ಭಾರ್ತಿ ಗುಪ್ತಾ ಬೇಡಿಕೆಗೆ ತೀವ್ರ ವಿರೋಧವ್ಯಕ್ತಪಡಿಸಿದರು. ಆದರೆ ಸಿಂಘಾಲ್, ಬಾಬ್ರಿ ಮಸೀದಿ ನಾಶ ಚಳುವಳಿಯಲ್ಲಿ ಬಾಗಿಯಾಗಿದ್ದು, ಸಮಾಜ ಸೇವೆಗೆ ತಮ್ಮ ಜೀವನ ಮೀಸಲಾಗಿಟ್ಟಿದ್ದರು ಎಂದು ಬಿಜೆಪಿಯ ಇಬ್ಬರು ಸದಸ್ಯರು ವಾಗ್ವಾದ ಆರಂಭಿಸಿದರು.