ಕಾಲಕಾಜಿ ಮಂದಿರದ ಬಳಿ ಹೂವಿನ ಅಂಗಡಿ ಇಟ್ಟುಕೊಂಡಿದ್ದ ಸಂಜಯ್, ಪಕ್ಕದ ಅಂಗಡಿಯ ಬಳಿ ಮದ್ಯ ಕುಡಿಯುತ್ತಿದ್ದ. ಆ ಸಮಯದಲ್ಲಿ ಅಲ್ಲಿಗೆ ಬಂದ ಇಬ್ಬರು ಬಾಲಕರು ಆತನ ಬಳಿ ಭಿಕ್ಷೆಯನ್ನು ಕೇಳಿದ್ದಾರೆ. ಆತ ಭಿಕ್ಷೆ ಹಾಕಲು ನಿರಾಕರಿಸಿದಾಗ ಮಕ್ಕಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸಿಟ್ಟಿಗೆದ್ದ ಸಂಜಯ್ ಅವರಲ್ಲಿ ಒಬ್ಬನ ಕೆನ್ನೆಗೆ ಬಾರಿಸಿದ್ದಾನೆ. ಹೀಗಾಗಿ ವಿವಾದ ತಾರಕಕ್ಕೇರಿ ಬಿಯರ್ ಬಾಟಲ್ನಿಂದ ಒಬ್ಬ ಬಾಲಕ ಸಂಜಯ್ ತಲೆಗೆ ಹೊಡೆದಿದ್ದಾನೆ. ಇನ್ನೊಬ್ಬ ಬಾಲಕ ಆ ಬಿಯರ್ ಬಾಟಲ್ ಎತ್ತಿಕೊಂಡು ಕುತ್ತಿಗೆಯನ್ನೇ ಕತ್ತರಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.