ಡಿಡಿಎ ಮುಖ್ಯಸ್ಥರಾದ ನಜೀಬ್ ಜಂಗ್ ಅವರಿಗೆ ಮೂರು ಪುಟಗಳ ಪತ್ರ ಬರೆದ ಕೇಜ್ರಿವಾಲ್, ಡಿಡಿಎ ಮತ್ತಷ್ಟು ಸ್ಲಮ್ಗಳನ್ನು ತೆರವುಗೊಳಿಸುವ ಬಗ್ಗೆ ಯೋಜನೆ ಹೊಂದಿದೆ. ಮೆಹರೌಲಿ ಪ್ರದೇಶದಲ್ಲಿರುವ ಸ್ಲಮ್ಗಳಲ್ಲಿರುವ ಜನತೆಗೆ ನೋಟಿಸ್ ನೀಡದೆ ಪುನರ್ವಸತಿ ಕಲ್ಪಿಸದೆ ಗುಡಿಸಲುಗಳನ್ನು ನಾಶ ಮಾಡಲಾಗಿದೆ.ಘಟನೆಯಲ್ಲಿ ಒಂದು ಹಸುಳೆ ಕೂಡಾ ಸಾವನ್ನಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 2014ರಲ್ಲಿ ದೆಹಲಿ ವಿಧಾನಸಭೆಯಲ್ಲಿ ಕಾನೂನು ಜಾರಿಗೆ ತರಲಾಗಿದ್ದು ಕಾನೂನಿನ ಪ್ರಕಾರ 2006 ಜನೆವರಿ 1 ನೇ ಕ್ಕಿಂತ ಮೊದಲಿದ್ದ ಗುಡಿಸಲುಗಳನ್ನು ತೆರವುಗೊಳಿಸುವಂತಿಲ್ಲ. ರಸ್ತೆಗಳ ಭೂಮಿಯನ್ನು ಕಬಳಿಸಿದ್ದಲ್ಲಿ ಅಥವಾ ಸರಕಾರಕ್ಕೆ ಅಗತ್ಯವಾದ ಭೂಮಿ ಬೇಕಾಗಿದ್ದಲ್ಲಿ ಮಾತ್ರ ಸ್ಲಮ್ಗಳನ್ನು ಕೆಡುವಬಹುದಾಗಿದೆ ಎನ್ನುವ ಬಗ್ಗೆ ಕಾನೂನಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.