ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವಕಾಶವಾದಿ ರಾಜಕಾರಣಿ: ಪ್ರಶಾಂತ್ ಭೂಷಣ್

ಶನಿವಾರ, 24 ಜನವರಿ 2015 (19:26 IST)
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾದ ಕಿರಣ್ ಬೇಡಿ ಅವಕಾಶವಾದಿ ರಾಜಕಾರಣಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ. 
 
ಕಿರಣ್ ಬೇಡಿಯನ್ನು ಸಿಎಂ ಅಭ್ಯರ್ಥಿಯನ್ನಾಗಿಸಿ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಬಿಜೆಪಿ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ಲೇವಡಿ ಮಾಡಿದರು.
 
ಆಮ್ ಆದ್ಮಿ ಪಕ್ಷ ರಚನೆಯಾದಾಗ ಕಿರಣ್ ಬೇಡಿಯವರಿಗೆ ಪಕ್ಷ ಸೇರ್ಪಡೆಯ ಆಹ್ವಾನ ನೀಡಲಾಗಿತ್ತು. ಆದರೆ, ನನಗೆ ರಾಜಕೀಯ ಇಷ್ಟವಿಲ್ಲ ಎಂದು ತಳ್ಳಿಹಾಕಿದ್ದರು. ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಮ್ಮತಿ ಸೂಚಿಸಿದ್ದಾರೆ. ಇದು ಅವಕಾಶವಾದ ಅಲ್ಲದೇ ಮತ್ತೇನು? ಎಂದು ಗುಡುಗಿದರು. 
 
ಬಿಜೆಪಿ ಪಕ್ಷದ ನಾಯಕರು ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ವಿದೇಶಗಳಲ್ಲಿರುವ ಕಪ್ಪು ಹಣ ಮರಳಿ ಸ್ವದೇಶಕ್ಕೆ ತರುವುದು, ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಗುರಿ ಎಂದಿದ್ದ ನರೇಂದ್ರ ಮೋದಿ ಸರಕಾರ ಕರ್ತವ್ಯನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆಪ್ ಮುಖಂಡ ಪ್ರಶಾಂತ್ ಭೂಷಣ್ ಲೇವಡಿ ಮಾಡಿದ್ದಾರೆ.  
 
 

ವೆಬ್ದುನಿಯಾವನ್ನು ಓದಿ