ಮೂಲಗಳ ಪ್ರಕಾರ ಮಿಶ್ರಾರ ಅತ್ಯುತ್ಸಾಹ ಶೈಲಿಯ ಕಾರ್ಯನಿರ್ವಹಣೆಯೇ ಅವರನ್ನು ಈ ಮಹತ್ವದ ಪದದಿಂದ ಹೊರ ಹೋಗುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಿಶ್ರಾ ದೆಹಲಿ ಜಲ ಮಂಡಳಿ (DJB) ನೀರಿನ ಟ್ಯಾಂಕರ್ ನಿರ್ವಹಣೆ, ವಿತರಣೆ ವ್ಯವಸ್ಥೆಯ ಮೇಲೆ ಮಾಡಿದ್ದ ಸತ್ಯಶೋಧನೆ ವರದಿಯನ್ನಾಧರಿಸಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್ ಅವರ ಮೇಲೆ ಎಫ್ಐಆರ್ ದಾಖಲಿಸುವಂತೆ ಮಿಶ್ರಾ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದರು. ದೆಹಲಿ ಸರ್ಕಾರ ಈ ವರದಿಯನ್ನು ಬಹಿರಂಗ ಪಡಿಸುವ ಮುನ್ನವೇ ಮಿಶ್ರಾ ಧಾವಂತವನ್ನು ಪ್ರದರ್ಶಿಸಿದ್ದರು.