ಅಪ್ಪನನ್ನು ಕೊಂದ ಅಪ್ರಾಪ್ತ ಮಗ !

ಮಂಗಳವಾರ, 16 ಸೆಪ್ಟಂಬರ್ 2014 (09:03 IST)
ಕುಡಿದ ಅಮಲಿನಲ್ಲಿದ್ದ ಅಪ್ಪ, ಅಮ್ಮನ ಮೇಲೆ ಕೈ ಎತ್ತಿದ್ದಕ್ಕೆ ಕೋಪಗೊಂಡ ಅಪ್ರಾಪ್ತ ವಯಸ್ಸಿನ ಮಗ ಹಡೆದ ತಂದೆಯನ್ನೇ ಕೊಂದು ಹಾಕಿದ ಘಟನೆ ಪಶ್ಚಿಮ ದೆಹಲಿಯಲ್ಲಿ ನಡೆದಿದೆ.

9ನೇ ತರಗತಿಯಲ್ಲಿ ಓದುತ್ತಿರುವ ಬಾಲಾಪರಾಧಿಯಯನ್ನು ಪೋಲಿಸರು ಬಂಧಿಸಿದ್ದಾರೆ. 
 
ಆಟೋ ಚಾಲಕ ಬಾಬು ಸಿಂಗ್ ಎಂಬಾತನೇ ಕೊಲೆಗೈದ ದುರ್ದೈವಿಯಾಗಿದ್ದು, ರೋಹಿಣಿ ಪ್ರದೇಶದ ನಿವಾಸವೊಂದರಲ್ಲಿ ಘಟನೆ ನಡೆದಿದೆ. 
 
ಪೋಲಿಸರ ಪ್ರಕಾರ ಕುಡಿದ ಅಮಲಿನಲ್ಲಿದ್ದ ಬಾಬು ಸಿಂಗ್ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಪತ್ನಿಯ ಮೇಲೆ ದಾಳಿ ಮಾಡಿದ. ಇದರಿಂದ ಕೆರಳಿದ ಮಗ ಚಾಕುವೊಂದನ್ನು ತೆಗೆದುಕೊಂಡು ತಂದೆಗೆ ಹಲವು ಬಾರಿ ಇರಿದಿದ್ದಾನೆ. 
 
ತಕ್ಷಣ ನೆರೆಮನೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ತೀವೃ ಗಾಯ ಮತ್ತು ರಕ್ತಸ್ರಾವದಿಂದ ನರಳುತ್ತಿದ್ದ ಬಾಬುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕುಳಿಯಲಿಲ್ಲ. 

ವೆಬ್ದುನಿಯಾವನ್ನು ಓದಿ