ದೆಹಲಿ, ಏಷ್ಯಾ ಮಟ್ಟದಲ್ಲಿ ಕೂಡ ಕಳಪೆ ಮಟ್ಟದಲ್ಲಿರುವಾಗ ಇದನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವುದಾದರೂ ಹೇಗೆ? ಎಲ್ಲಾ ನಿಯಮಗಳು ಮತ್ತು ಸಾಕಷ್ಟು ಸಫಾಯಿ ಕರ್ಮಚಾರಿಗಳು ಲಭ್ಯವಾಗಿರುವ ಹೊರತಾಗಿಯೂ ದೆಹಲಿಯ ಎಲ್ಲಾ ರಸ್ತೆಗಳನ್ನು ಮತ್ತು ಚರಂಡಿಗಳನ್ನು ಸರಿಯಾಗಿ ಶುದ್ಧಗೊಳಿಸಲಾಗುತ್ತಿಲ್ಲ " ಎಂದು ನ್ಯಾಯಮೂರ್ತಿಗಳಾದ ಬಿ.ಡಿ. ಅಹ್ಮದ್ ಮತ್ತು ಸಂಜೀವ್ ಸಚ್ದೇವಾ ಪೀಠ ಹೇಳಿದೆ.
"ಈ ಉದ್ದೇಶಕ್ಕಾಗಿ, ದೆಹಲಿ ಪುರಸಭೆ (MCD) ಆಯುಕ್ತ ಫೆಬ್ರವರಿ 13, 2001 ರಂದು ಹೊರಡಿಸಿದ್ದ ಆದೇಶವನ್ನು ಅನುಷ್ಠಾನಕ್ಕೆ ತರಬೇಕು ಎಂದು ಅರ್ಜಿದಾರ (ಸ್ವಯಂ ಸೇವಾ ಸಂಸ್ಥೆ) ಸಲಹೆ ನೀಡಿದೆ. ಈ ಕುರಿತು ನಾವು ಪರಿಶೀಲಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿದೆ.