ಅತ್ಯಾಚಾರವೆಸಗಿ ಸಿಎಂ ಕೇಜ್ರಿವಾಲ್ ಮನೆ ಮುಂದೆ ಎಸೆದು ಹೋದರು
ಸೋಮವಾರ, 4 ಮೇ 2015 (14:52 IST)
ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಅಸ್ವಸ್ಥಗೊಂಡ ಆಕೆಯನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮನೆ ಮುಂದೆ ಆಕೆಯನ್ನು ಎಸೆದು ಹೋದ ಆಘಾತಕಾರಿ ಘಟನೆ ವರದಿಯಾಗಿದೆ.
ದೆಹಲಿಯ ವಿಕಾಸ ಭವನ ಬಳಿ ಈ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಯುವತಿ ಬಿದ್ದಿದ್ದ ಸ್ವಲ್ಪ ದೂರದಲ್ಲಿಯೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯಿದೆ. ಆಕೆಯ ಜತೆ ಕೆಲಸ ಮಾಡುವವರೇ ಆಕೆಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ಮಾಹಿತಿ ಪಡೆದು ಸ್ಥಳಕ್ಕಾಗಮಿಲಿದ ಪೊಲೀಸರು ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಪೀಡಿತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಎಲ್ಎನ್ಜೆಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಂಪು ಪಾನೀಯಕ್ಕೆ ಅಮಲು ಬರಿಸುವ ಪದಾರ್ಥ ಸೇರಿಸಿ ಯುವತಿಗೆ ಕುಡಿಸಿದ್ದ ಆಕೆಯ ಸಹೋದ್ಯೋಗಿಗಳು, ಆಕೆಯ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಅತ್ಯಾಚಾರವೆಸಗಿ ನಂತರ ಆಕೆಯನ್ನು ಯುವತಿಯನ್ನು ರಸ್ತೆ ಮಧ್ಯದಲ್ಲೇ ಎಸೆದುಹೋಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.