ಶನಿ ಶಿಂಗ್ಣಾಪುರ್ ಮತ್ತು ತ್ರಿಂಭಕೇಶ್ವರ್ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶಿಸುವ ಹಕ್ಕು ಪಡೆದುಕೊಂಡು ಗೆಲುವಿನ ಉತ್ಸಾಹದಲ್ಲಿರುವ ಭೂಮಾತಾ ಬ್ರಿಗೇಡ್ನ ತೃಪ್ತಿ ದೇಸಾಯಿ, ಇದೀಗ, ಮಹಿಳೆಯರಿಗೆ ನಿಷೇಧ ಹೇರಿರುವ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಎಐಎಂಐಎಂ ಮುಖಂಡ ಹಾಜಿ ರಫತ್ ಹುಸೈನ್ ಮಾತನಾಡಿ, ಸಮಾಧಿಯಿರುವ ಸ್ಥಳದಲ್ಲಿ ಮಹಿಳೆಯರು ಪ್ರವೇಶಿಸುವುದು ಇಸ್ಲಾಂಗೆ ವಿರುದ್ಧವಾಗಿದೆ. ನಮ್ಮ ಪಕ್ಷದ ಬೆಂಬಲಿಗರು ಯಾವುದೇ ಕಾರಣಕ್ಕೂ ದೇಸಾಯಿಯವರನ್ನು ದರ್ಗಾದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.