ಸರಕಾರದ ಈ ಯೋಜನೆಯಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಹೆಚ್ಚಳವಾಗುವುದು ಮತ್ತು ಲಕ್ಷಾಂತರ ಜನರಿಗೆ ಉದ್ಯೋಗಗಳು ಲಭಿಸಲಿವೆ. ಮೋದಿ ಸರಕಾರ ಬಯಸುವುದೇನೆಂದರೆ, 2019ರವರೆಗೆ ಪ್ರತಿಯೊಬ್ಬ ಭಾರತೀಯನ ಹತ್ತಿರ ಸ್ಮಾರ್ಟ್ಫೋನ್ ಇರಬೇಕು. ಸದ್ಯಕ್ಕೆ ದೇಶದಲ್ಲಿ ಶೇ.74ರಷ್ಟು ಜನರ ಹತ್ತಿರ ಮೊಬೈಲ್ ಫೋನ್ ಇದೆ ಆದರೆ, ಈ ಪ್ರಮಾಣ ಭಾಗಶಃ ನಗರಗಳಲ್ಲಿ ಹೆಚ್ಚಿಗಿದೆ ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಕನಿಷ್ಠ ವ್ಯಕ್ತಿಗೂ ಆರ್ಥಿಕ ಸಹಾಯ ಸಿಗಬೇಕು. ಇದಕ್ಕಾಗಿ ಮೊಬೈಲ್ ಪೋನ್ನ ಅವಶ್ಯಕತೆ ಇದೆ. ಏಕೆಂದರೆ, ಇದರಿಂದ ಮೊಬೈಲ್ ಬ್ಯಾಂಕಿಂಗ್ ಬಳಸಬಹುದಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೆ ಬ್ಯಾಂಕ್ ಖಾತೆ ತೆಗೆಯಲಾಗುವುದು ಮತ್ತು ಖಾತೆದಾರರಿಗೆ ಒಂದು ಲಕ್ಷ ರೂಪಾಯಿ ವಿಮೆ ಸಿಗುವುದು.