ಪ್ರಕರಣದ ಆರೋಪಿಯಾಗಿದ್ದ ಜಯಲಲಿತಾ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ನಡೆಸಿದ್ದ ಕೋರ್ಟ್, ಕಳೆದ ಮೇ 11ರಂದು ತೀರ್ಪು ನೀಡಿ ಜಯಲಲಿತಾ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದಾರೆ ಎಂದು ಆದೇಶಿಸುವ ಮೂಲಕ ಪ್ರಕರಣದಿಂದ ಖುಲಾಸೆಗಳಿಸಿತ್ತು. ಆದ್ದರಿಂದ ಪ್ರಕರಣದ ಪ್ರತಿವಾದಿಯಾಗಿದ್ದ ನಾಯಕ ಅನ್ಬಳಗನ್ ಇಂದು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.