ಹಿಂದೂ- ಮುಸ್ಲಿಮ್‌ರಲ್ಲಿ ಒಡಕನ್ನುಂಟು ಮಾಡುವುದು ಮೋದಿ ಚುನಾವಣಾ ತಂತ್ರ: ರಾಹುಲ್ ಗಾಂಧಿ

ಬುಧವಾರ, 10 ಫೆಬ್ರವರಿ 2016 (15:21 IST)
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 'ವಿಷಪೂರಿತ ಪ್ರಚಾರ' ಕೈಗೊಳ್ಳುವ ಮೂಲಕ ಹಿಂದೂ- ಮುಸ್ಲಿಮರಲ್ಲಿ ಒಡಕನ್ನುಂಟು ಮಾಡುವ ತಂತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅನುಸರಿಸುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ

 
ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಗಾಂಧಿ, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚುನಾವಣೆಯ ಸಂದರ್ಭದಲ್ಲಿ ಎರಡು ರೀತಿಯ ಅಭಿಯಾನಗಳನ್ನು ಕೈಗೊಳ್ಳುತ್ತಾರೆ- ಒಂದು ವಿಕಾಸದ ಪ್ರಚಾರ ಮತ್ತೊಂದು ಪಿಷಪೂರಿತ ಪ್ರಚಾರ ಎಂದು ಹೇಳಿದ್ದಾರೆ. 
 
ಚುನಾವಣೆಯನ್ನು ಗೆಲ್ಲಲು ನರೇಂದ್ರ ಮೋದಿ ಮತ್ತು ಆರ್‌ಎಸ್ಎಸ್ ಹಿಂದೂ ಮತ್ತು ಮುಸ್ಲಿಮರಲ್ಲಿ ಒಡಕನ್ನುಂಟು ಮಾಡುವ ದಾರಿಯನ್ನು ತುಳಿಯುತ್ತಾರೆ. ಅದು ಬಿಹಾರದ ಚುನಾವಣೆಯಾಗಿರಲಿ, ಉತ್ತರ ಪ್ರದೇಶ, ಆಸ್ಸಾಂದ ಚುನಾವಣೆಯಾಗಿರಲಿ. ಅವರು ಎಲ್ಲಿಗೆ ಹೋದರು ಎರಡು ರೀತಿಯ ಪ್ರಚಾರವನ್ನು ಅನುಸರಿಸುತ್ತಾರೆ. ಒಂದು ಅಭಿವೃದ್ಧಿ ಹೆಸರಿನಲ್ಲಿ ನಡೆಸುವ ಪ್ರಚಾರ. ಅದು ಎಲ್ಲರ ಗಮನಕ್ಕೆ ಬರುವಂತದ್ದು. ಇನ್ನೊಂದು ರಹಸ್ಯವಾಗಿ ನಡೆಸಲ್ಪಡುವ ವಿಷಪೂರಿತ ಪ್ರಚಾರ. ಈ ಸವಾಲನ್ನು ಎದುರಿಸಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲಿದೆ ಎಂದು ರಾಹುಲ್ ಗುಡುಗಿದ್ದಾರೆ. 

ವೆಬ್ದುನಿಯಾವನ್ನು ಓದಿ