ಸೋನಿತ್ ಪುರ್ ಜಿಲ್ಲೆಯ ಗೋಹಾಪುರ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಂತಿಪ್ರಿಯರಾದ ಆಸ್ಸಾಂ ಜನತೆಗೆ ಬಿಜೆಪಿ ಯಾವ ರೀತಿ ಸಮುದಾಯಗಳನ್ನು ಒಡೆದು ಆಳಲು ಬಯಸುತ್ತದೆ ಎನ್ನುವ ಬಗ್ಗೆ ಮಾಹಿತಿಯಿದೆ ಎಂದು ಲೇವಡಿ ಮಾಡಿದರು.
ವಲಸೆ ಮುಸ್ಲಿಮರ ಪ್ರಭಾವ ಹೆಚ್ಚಳವಾಗಿರುವ ಬಾರ್ಪೇಟಾ ಜಿಲ್ಲೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎಐಯುಡಿಎಫ್ ಪಕ್ಷ 2011ರಲ್ಲಿ ನಡೆದ ಚುನಾವಣೆಯಲ್ಲಿ ಎಂಟರಲ್ಲಿ ಐದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.