ಸಚಿವೆ ಸುಷ್ಮಾ ಸ್ವರಾಜ್ ಜೀವವುಳಿಸಿದ ವೈದ್ಯರಿಗೆ ಪದ್ಮ ಪ್ರಶಸ್ತಿ

ಶುಕ್ರವಾರ, 14 ಏಪ್ರಿಲ್ 2017 (09:39 IST)
ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕಿಡ್ನಿ ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಮುಕುಟ್ ಮಿನ್ಸ್ ಗೆ ಪದ್ಮ ಶ್ರೀ ಗೌರವ ನೀಡಲಾಗಿದೆ.

 

ದೆಹಲಿಯ ಏಮ್ಸ್ ವೈದ್ಯರ ತಂಡ ಸುಷ್ಮಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಇವರಲ್ಲಿ ಡಾ. ಮುಕುಟ್ ಪ್ರಮುಖರಾಗಿದ್ದರು. ಡಾ. ಮುಕುಟ್ ಇದುವರೆಗೆ ಸುಮಾರು 3,300 ಕಿಡ್ನಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರ ಸೇವೆ ಪರಿಗಣಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

 
ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಅವರು ಮೂತ್ರಪಿಂಡ ಶಸ್ತ್ರಚಿಕಿತ್ಸೆ ವಿಚಾರದಲ್ಲಿ ಪರಿಣಿತ ಹೊಂದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ