ಪ್ರತಿ ದಿನದಂತೆ ಘಟನೆ ನಡೆದ ರಾತ್ರಿ ಕೂಡ ಕುಡಿದು ಮನೆಗೆ ಮರಳಿದ ಗೋಕುಲ್ ತನ್ನ ಪತ್ನಿಯ ಬಳಿ ಅಡುಗೆ ಮಾಡಿ ಊಟ ಬಡಿಸುವಂತೆ ಹೇಳಿದ್ದಾನೆ. ಮಧ್ಯರಾತ್ರಿಯಾಗಿದ್ದರಿಂದ ಆತನ ಪತ್ನಿ ಅಡುಗೆ ಮಾಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ ಮತ್ತು ಖಾಲಿ ಸರಾಯಿ ಬಾಟಲಿಯಲ್ಲಿ ಮೂತ್ರವನ್ನು ತುಂಬಿ 14 ವರ್ಷದ ಮಗ ಮತ್ತು 12 ವರ್ಷದ ಮಗಳ ಸಮ್ಮುಖದಲ್ಲಿ ಅದನ್ನು ಕುಡಿಯುವಂತೆ ಬಲವಂತ ಹೇರಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಗೋಕುಲ್ ಮೇಲೆ ಐಪಿಸಿ ವಿಭಾಗ 294, 323, 506, 498ಎ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಕಿಲ್ಲೋಡ್ ಪೋಲಿಸ್ ಠಾಣಾಧಿಕಾರಿ ಜೈಸಿಂಗ್ ಸುಲಿಯಾ ತಿಳಿಸಿದ್ದಾರೆ.