ರಾ ಮುಖ್ಯಸ್ಥ ಎ.ಎಸ್ ದುಲತ್, ವಾಜಪೇಯಿ ಅಧಿಕಾರಾವಧಿಯಲ್ಲಿನ ಕೆಲವು ಮಾಹಿತಿಗಳನ್ನು ಬಹಿರಂಗ ಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯತೆಯ ಸುಳ್ಳು ಮುಖವಾಡವನ್ನು ಧರಿಸಿದೆ ಎಂದು ಟೀಕಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಅಜೊಯ್ ಕುಮಾರ್, "ಕೆಲವು ಗೊಂದಲದ ಸತ್ಯಗಳು ಬೆಳಕಿಗೆ ಬಂದಿವೆ. ಅದರಲ್ಲೊಂದು ಬಿಜೆಪಿ ಸರ್ಕಾರ (1999) ಪಾಕ್ ಮೂಲದ ಉಗ್ರ ಹಿಜ್ಬುಲ್ ಮುಜಾಹಿದ್ದೀನ್ ಜತೆ ಬಿಜೆಪಿ ಸಂಪರ್ಕದಲ್ಲಿತ್ತು ಎಂಬ ವಿಷಯ. ಉಗ್ರನ ಮಗ ವೈದ್ಯಕೀಯ ಕಾಲೇಜನ್ನು ಸೇರಲು ಬಿಜೆಪಿ ನೆರವಾಗಿತ್ತು", ಎಂದು ಆರೋಪಿಸಿದ್ದಾರೆ.
"ಇದೆಲ್ಲ ಬಿಜೆಪಿ ರಾಷ್ಟ್ರೀಯತಾವಾದದ ಸುಳ್ಳು ಪ್ರತಿಪಾದಕರು. ಸಲಾಹುದ್ದೀನ್ ಅವರಂತವರು ಪಾಕ್ನಲ್ಲಿ ಕುಳಿತು ಭಾರತದ ವಿರುದ್ಧ ದ್ವೇಷ ಹೆಚ್ಚಿಸುವ ಕೆಲಸ ಮಾಡುತ್ತಾರೆ.ಇಲ್ಲಿ ಬಿಜೆಪಿ ರಾಷ್ಟ್ರೀಯತಾವಾದದ ನಕಲಿ ಮುಖವಾಡ ತೊಟ್ಟು ಕುಳಿತಿದೆ", ಎಂದು ಕಾಂಗ್ರೆಸ್ ನಾಯಕ ಅಜೊಯ್ ಕುಮಾರ್ ಟೀಕಿಸಿದ್ದಾರೆ.