ಯುಪಿಎ ಸರಕಾರದ ಕೊಳೆಯನ್ನು ತೊಳೆಯಲು 50 ವರ್ಷಗಳಾದರೂ ಸಾಕಾಗುವುದಿಲ್ಲ. ಆದರೆ, ಮುಂಬರುವ ನಾಲ್ಕು ವರ್ಷಗಳಲ್ಲಿ ಜನತೆಯ ಆಶೋತ್ತರಗಳನ್ನು ಈಡೇರಿಸುವುದು ಅಗತ್ಯವಾಗಿದೆ. ಜನತೆಗೆ ಅಚ್ಚೇ ದಿನ್ ಬರಲಿವೆ ಎಂದು ಬಿಜೆಪಿ ಹೇಳಿಕೆ ನೀಡಿ ಇದೀಗ ಜನತೆಯನ್ನು ವಂಚಿಸಿದಂತಾಗಿದೆ ಎಂದು ಠಾಕ್ರೆ ತಿಳಿಸಿದ್ದಾರೆ.
ಜಮ್ಮು ಕಾಶ್ಮಿರದಲ್ಲಿ ಪಿಡಿಪಿ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡು ಸರಕಾರ ರಚಿಸಿದ ಬಿಜೆಪಿ, ಜಮ್ಮು ಕಾಶ್ಮಿರದಲ್ಲಿ ಪ್ರತಿಭಟನಾಕಾರರು ಪಾಕಿಸ್ತಾನ ಮತ್ತು ಐಸಿಎಸ್ ಧ್ವಜಗಳನ್ನು ಹಾರಿಸುತ್ತಿದ್ದರೂ ಬಿಜೆಪಿ ಯಾಕೆ ಮೌನವಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದಾರೆ.