ಪ್ರತಿಯೊಬ್ಬ ರಾಜಕಾರಣಿ ನಮ್ಮ ವಿರುದ್ಧ ಒಂದಾಗಿದ್ದಾರೆ, ಆದ್ರೆ ಜನತೆ ನಮ್ಮೊಂದಿಗಿದ್ದಾರೆ: ಕೇಜ್ರಿವಾಲ್

ಗುರುವಾರ, 21 ಮೇ 2015 (17:43 IST)
ದೆಹಲಿಯ ಲೆಫ್ಟಿನೆಂಟ್ ಗೌವರ್ನರ್ ನಜೀಬ್ ಜಂಗ್ ವಿರುದ್ಧದ ತಿಕ್ಕಾಟದ ಕುರಿತಂತೆ ಹೇಳಿಕೆ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರತಿಯೊಬ್ಬ ರಾಜಕಾರಣಿ ನಮ್ಮ ವಿರುದ್ಧದ ಹೋರಾಟದಲ್ಲಿ ಒಂದಾಗಿದ್ದಾರೆ. ಆದರೆ, ಜನತೆ ನಮ್ಮೊಂದಿಗಿರುವವರೆಗೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.   
 
ಕೇಶವಪುರಂನಲ್ಲಿರುವ ಕೇಂದ್ರಿಯ ಭಂಡಾರ್‌ನ 100ನೇ ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಜ್ರಿವಾಲ್, ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸರಕಾರ ಅವಿರತ ಪ್ರಯತ್ನ ನಡೆಸಿದೆ ಎಂದು ತಿಳಿಸಿದ್ದಾರೆ.  
 
ದೆಹಲಿ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿದ್ದಾರೆ. ಜನತೆಯ ವಿಶ್ವಾಸ ಕಳೆದುಕೊಳ್ಳುವಂತಹ ಕಾರ್ಯ ಮಾಡುವುದಿಲ್ಲ.ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ನನ್ನನ್ನು ನಂಬಿ ಎಂದಿದ್ದಾರೆ.
 
ಬೇಸಿಗೆ ಅವಧಿಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ದರಗಳು ನಿಯಂತ್ರಣದಲ್ಲಿರುವಂತೆ ಅನುವಾಗಲು ಸರಕಾರ ಪ್ರಯತ್ನ ಪಡುತ್ತಿದೆ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ