ಲೋಹಿಯಾ ನಗರದಲ್ಲಿ ರಸ್ತೆ ಬದಿ ನಿರ್ಮಿಸಲಾಗಿರುವ ಹನುಮಾನ್ ಮಂದಿರ, ಸಾರ್ವಜನಿಕರ, ವಾಹನ ಸವಾರರ ಓಡಾಡಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದು ಇದನ್ನು ಕೆಡವಿ ಹಾಕಲಾಗುವುದು ಎಂದು ಜಿಲ್ಲಾಡಳಿತ ನೋಟಿಸ್ ನೀಡಿದೆ. ಆದರೆ ಈ ನೋಟಿಸ್ ಅನ್ನು ಹನುಮಂತನ ಹೆಸರಿಗೆ ಕಳುಹಿಸಲಾಗಿದೆ.'ನಿಮ್ಮ ದೇವಸ್ಥಾನವನ್ನು ಕೆಡವಿ ಹಾಕಬಾರದು ಅನ್ನುವುದಕ್ಕೆ ಕಾರಣ ನೀಡಿ' ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ.