ಇಂತಹ ಹೇಯ ಕೃತ್ಯ ಪಾಟ್ನಾದ ಬಿಹ್ತಾ ಪಟ್ಟಣದಲ್ಲಿ ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಕೌಡಿಯಾ ಗ್ರಾಮದ ನಿವಾಸಿಯಾದ ಮಾಜಿ ಸೈನಿಕ ರಾಮಾನುಜ್ ವರ್ಮಾ ಮನೆಗೆ ರಾತ್ರಿ ಮರಳುತ್ತಿರುವಾಗ ಇಬ್ಬರು ಆರೋಪಿ ಸಹೋದರರಾದ ಲಾಲ್ಕು ಯಾದವ್ ಮತ್ತು ಬಿನಾ ಯಾದವ್ ಅತನನ್ನು ರಸ್ತೆಯಲ್ಲಿ ನಿಲ್ಲಿಸಿ, ಕೂಡಲೇ ಮೀಸೆಯನ್ನು ಬೋಳಿಸುವಂತೆ ಒತ್ತಡ ಹೇರಿದ್ದಾರೆ. ಮತ್ತೆ ನಿನ್ನ ಮುಖದ ಮೇಲೆ ಮೀಸೆ ಕಂಡಲ್ಲಿ ನಾವೇ ನಿನ್ನ ಮೀಸೆಯನ್ನು ಬೋಳಿಸುತ್ತೇವೆ ಎಂದು ಹೆದರಿಸಿದ್ದಾರೆ.
ಆರೋಪಿಗಳ ದೌರ್ಜನ್ಯವನ್ನು ನಾನು ಪ್ರತಿಭಟಿಸಿದ್ದರಿಂದ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ತಮ್ಮ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡ ಆರೋಪಿಗಳು, ಕತ್ತಿಯಿಂದ ನನ್ನ ಕಿವಿಗಳನ್ನು ಕತ್ತರಿಸಿ ನನಗೆ ಸೇರಿದ್ದ ಬೈಕ್ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಸೈನಿಕ ಪೊಲೀಸರಿಗೆ ದೂರು ನೀಡಿದ್ದಾನೆ.