ಎಡಬಿಡದೇ ಸುರಿಯುತ್ತಿದ್ದ ಮಳೆ ಮತ್ತು ಕೆಟ್ಟ ಹವಾಮಾನ ಲೆಕ್ಕಿಸದೇ ನೂರಾರು ಬುಡಕಟ್ಟು ಜನರು ಗುಜರಾತ್ ರಾಜಸ್ಥಾನ ಗಡಿಯ ಮಹಿಸಾಗರ ಜಿಲ್ಲೆಯ ಕುಗ್ರಾಮ ಸಾರಸ್ವದಲ್ಲಿ ಜಾತ್ರೆಗೆ ಜಮಾಯಿಸಿದ್ದರು. ಈ ಜಾತ್ರೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ನಡೆಸಲಾಗುತ್ತದೆ.ರಾಜಕೀಯ ಮುಖಂಡರು ಮತ್ತು ಸೆಲಿಬ್ರಿಟಿಗಳಿಗೆ ಮಂದಿರಗಳು ಅಪರೂಪವೇನಲ್ಲ.