ಜೂನ್ 30, 1995ರಲ್ಲಿ ಪತ್ನಿ ಸುನೀತಾ ತನ್ನ ಮನೆಯನ್ನು ತ್ಯಜಿಸಿದ ನಂತರ ಗಂಡ ಶ್ರೀನಿವಾಸ್ ಜುಲೈ 14, 1995ರಲ್ಲಿ ವೈವಾಹಿಕ ಕ್ರೌರ್ಯ ಮತ್ತು ವೈವಾಹಿಕ ಸಂಬಂಧ ಕಡಿತಗೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಅದಕ್ಕೆ ಪ್ರತಿಯಾಗಿ ಪತ್ನಿ ಸುನೀತಾ ತನ್ನ ಗಂಡ ಮತ್ತು ಆತನ ಮನೆ 7 ಜನ ಸದಸ್ಯರ ಮೇಲೆ ಭಾರತೀಯ ದಂಡಸಂಹಿತೆಯ ಅನೇಕ ವಿಭಾಗಗಳಡಿ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯಡಿಯಲ್ಲಿ ಪ್ರತಿದೂರು ಸಲ್ಲಿಸಿದ್ದರು. ತತ್ಪರಿಣಾಮವಾಗಿ ಆಕೆಯ ಗಂಡ ಮತ್ತು ಆತನ ಕಡೆಯವರಿಗೆ ಜೈಲು ಶಿಕ್ಷೆಯಾಗಿತ್ತು.
ಜೂನ್ 30, 2000 ನೇ ವರ್ಷದಲ್ಲಿ ಶ್ರೀನಿವಾಸ್ ಮತ್ತು ಅವರ ಸಂಬಂಧಿಗಳು ನಿರಪರಾಧಿಗಳು ಎಂದು ಸಾಬೀತಾಗಿ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತ್ತು. ಬೇರೊಂದು ಕುಟುಂಬ ನ್ಯಾಯಾಲಯ ಡಿಸೆಂಬರ್ 30, 1999ರಲ್ಲಿ ಶ್ರೀನಿವಾಸ್ ಅವರಿಗೆ ವಿಚ್ಛೇದನವನ್ನು ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.