ಕಪ್ಪು ಹಣ: ಅಪರಾಧಿಗಳ ರಕ್ಷಣೆಗೆ ಜೇಟ್ಲಿ ನಿಂತಿದ್ದಾರೆ ಎಂದು ಆರೋಪಿಸಿದ ಜೇಠ್ಮಲಾನಿ
ಶುಕ್ರವಾರ, 24 ಅಕ್ಟೋಬರ್ 2014 (18:30 IST)
ನನಗೆ ಬಿಜೆಪಿ ಪಕ್ಷಕ್ಕಿಂತ ದೇಶದ ಜನರ ಬಗ್ಗೆ ಹೆಚ್ಚಿನ ಕಾಳಜಿಯಿದೆ. ವಿತ್ತಸಚಿವರು ಅಪರಾರಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಹಿರಿಯ ವಕೀಲ ರಾಮಜೇಠ್ಮಲಾನಿ ವಾಗ್ದಾಳಿ ನಡೆಸಿದ್ದಾರೆ.
ಕಪ್ಪು ಹಣ ಹೊಂದಿರುವವರ ಹೆಸರು ಬಹಿರಂಗ ವಿಚಾರ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವಿದೇಶಿ ಬ್ಯಾಂಕ್ಗಳಲ್ಲಿ ಕಪ್ಪು ಹಣ ಹೊಂದಿರುವವರ ಕೆಲ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ನೀಡಿರುವ ಹೇಳಿಕೆ ಆಘಾತ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ವ್ಯಕ್ತಿಗಳ ಹೆಸರುಗಳನ್ನು ಮಾತ್ರ ಬಹಿರಂಗಪಡಿಸಲಾಗುವುದು ಎಂದರೆ ಅರ್ಥವೇನು? ಉಳಿದವರು, ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರಾ? ಇನ್ನುಳಿದ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲು ಮೋದಿ ಸರಕಾರಕ್ಕಿರುವ ಅಡೆತಡೆಗಳು ಯಾವವು ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಪ್ರಶ್ನಿಸಿದ್ದಾರೆ.