ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ಬೆಂಕಿ ಅನಾಹುತ: ನೂರಾರು ಗುಡಿಸಲು ಭಸ್ಮ

ಶುಕ್ರವಾರ, 24 ಅಕ್ಟೋಬರ್ 2014 (11:53 IST)
ದೆಹಲಿಯ ಶಾಸ್ತ್ರಿ ಪಾರ್ಕ್ ಸ್ಲಂನಲ್ಲಿ ಭೀಕರ ಬೆಂಕಿ ಅವಘಢ ಕಾಣಿಸಿಕೊಂಡಿದ್ದು, ಅರ್ಧ ಕಿಮೀ ದೂರದವರೆಗೆ ಬೆಂಕಿ ಆವರಿಸಿದೆ.  13 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.

ದೀಪಾವಳಿ ಪಟಾಕಿ ಸಿಡಿಸುವ ವೇಳೆ ಭಾರೀ ದುರಂತ ಸಂಭವಿಸಿದ್ದು, ನೂರಾರು ಗುಡಿಸಲುಗಳು ಧಗಧಗನೇ ಹೊತ್ತಿ ಉರಿಯುತ್ತಿದ್ದು, ಕೆಲವು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.  ಪಟಾಕಿಯ ಬೆಂಕಿ ಗುಡಿಸಲೊಂದಕ್ಕೆ ತಾಗಿ ಇಡೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿತು.

ಬೆಂಕಿ ತೀವ್ರವಾಗಿ ಹರಡುತ್ತಿರುವುದರಿಂದ ಅನೇಕ ಗುಡಿಸಲುಗಳನ್ನು ಬೆಂಕಿಗೆ ಆಹುತಿ ತೆಗೆದುಕೊಳ್ಳುತ್ತಿದ್ದ, ಗುಡಿಸಲುಗಳಿಂದ ಪಾತ್ರೆ,ಸರಂಜಾಮುಗಳು ಸುಟ್ಟು ಭಸ್ಮವಾಗಿದೆ. 
 
 

ವೆಬ್ದುನಿಯಾವನ್ನು ಓದಿ