ಕಾಲಿಗೆ ಬೀಳುವುದು ಬಿಜೆಪಿ ಸಂಸ್ಕೃತಿಯಲ್ಲ, ವಿಕೃತಿ; ಈಶ್ವರಪ್ಪ ಟಾಂಗ್

ಬುಧವಾರ, 8 ಮಾರ್ಚ್ 2017 (12:24 IST)
ಬೆಂಗಳೂರು(ಮಾ.07): ಕಾಲಿಗೆ ಬೀಳುವುದು ಬಿಜೆಪಿ ಸಂಸ್ಕೃತಿಯಲ್ಲ, ಅಧಿಕಾರ ಸ್ಥಾನಮಾನದ ಆಸೆಗಾಗಿ ಕಾಲಿಗೆ ಬೀಳುವುದು ವಿಕೃತಿ ಎನ್ನುವ ಮೂಲಕ ಯಡಿಯೂರಪ್ಪನವರಿಗೆ ಈಶ್ವರಪ್ಪ ಟಾಂಗ್ ನೀಡಿದ್ದಾರೆ.


ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಕಾಲಿಗೆ ಬಿದ್ದ ಕುರಿತಂತೆ ಆನೇಕಲ್`ನಲ್ಲಿ ಪ್ರತಿಕ್ರಿಯಿಸಿರುವ ಅವರು,  ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ನಮ್ಮ ಸಂಸ್ಕೃತಿ. ಅಧಿಕಾರದಾಸೆಗಾಗಿ ಸಮಾನ ವಯಸ್ಕರು ಸಮಾನರ ಕಾಲಿಗೆ ಬೀಳುವುದು ವಿಕೃತ ಎಂದಿದ್ದಾರೆ.

ಈ ಮೂಲಕ ತಮ್ಮ ಮತ್ತು ಯಡಿಯೂರಪ್ಪನವರ ನಡುವೆ ಈಗಳು ಮನಸ್ತಾಪ ಇದೆ ಎಂಬುದನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ