ಟ್ರೇನ್‌ನಲ್ಲಿ ಸೀಟ್‌ಗಾಗಿ ಜಗಳ: ವ್ಯಾಪಾರಿಯನ್ನು ಎತ್ತಿ ಹೊರಕ್ಕೆಸೆದ ಕ್ರೂರಿಗಳು

ಶನಿವಾರ, 23 ಆಗಸ್ಟ್ 2014 (09:40 IST)
ಸದಾ ತುಂಬಿ ತುಳುಕುವ ನಮ್ಮ ದೇಶದ ಬಸ್, ಟ್ರೇನ್‌ಗಳಲ್ಲಿ ಸೀಟ್‌ಗಾಗಿ ಜಗಳ ಸಾಮಾನ್ಯವಾದುದು.  ಪಶ್ಚಿಮಬಂಗಾಳದ ವ್ಯಾಪಾರಿಯೊಬ್ಬನನ್ನು ಕೆಲವು ಪ್ರಯಾಣಿಕರು ರೇಲ್ವೇಯಿಂದ ಎತ್ತಿ ಹೊರಕ್ಕೆಸೆದ ಪರಿಣಾಮ  ಅವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮುಜಫ್ಪರ್‌ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಸೀಟ್‌ಗಾಗಿ ಜಗಳವಾಗಿತ್ತು ಎಂದು ತಿಳಿದುಬಂದಿದೆ. 


 
ರೇಲ್ವೇ ಪೋಲಿಸರ ಪ್ರಕಾರ ಶೇಖ್ ರಹಮತುಲ್ಲಾ ಎಂಬ ವ್ಯಾಪಾರಿ ದೆಹಲಿಯಿಂದ ಅಮೃತಸರ್‌ಗೆ ಹೋಗುತ್ತಿದ್ದರು. ಮುಜಫ್ಪರ್‌ನಗರದಲ್ಲಿ ರೇಲ್ವೇಯನ್ನೇರಿದ ಪ್ರಯಾಣಿಕರು  ಜಲಂಧರ್- ಅಮೃತಸರ್ ಎಕ್ಸ್ಪ್ರೆಸ್‌ವನ್ನೇರಿದ ರಹಮುತುಲ್ಲಾ ಬಳಿ ಸೀಟ್ ಬಿಟ್ಟುಕೊಡುವಂತೆ ಒತ್ತಾಯಿಸತೊಡಗಿದರು. ಅವರು ಅದಕ್ಕೊಪ್ಪದೇ ವಾಗ್ವಾದಕ್ಕಿಳಿದರು. ಸಂಘರ್ಷ ತಾರಕಕ್ಕೇರಿದಾಗ ಆರೋಪಿಗಳು ಆವೇಶದ ಭರದಲ್ಲಿ ಅವರನ್ನೆತ್ತಿ ರೇಲ್ವೇಯಿಂದ ಹೊರಕ್ಕೆಸೆದರು. 
 
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು . ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.  ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. 

ವೆಬ್ದುನಿಯಾವನ್ನು ಓದಿ