ಪಠಾನ್ಕೋಟ್ ಉಗ್ರರ ದಾಳಿಯಿಂದ ಎಚ್ಚೆತ್ತುಕೊಂಡಿರುವ ಭಾರತೀಯ ವಾಯುಸೇನೆ ಸಿಬ್ಬಂದಿ ಕೆಲವರು ವಾಯುನೆಲೆಯ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡ ವಾಯುಸೇನೆ ಭದ್ರತಾ ಪಡೆಗಳು ನಾಲ್ಕು ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಭಾರತೀಯ ವಾಯುಸೇನಾ ನೆಲೆಗಳ ಮೇಲೆ ಉಗ್ರರ ಕಣ್ಣಿದೆ ಎನ್ನುವ ಮಾಹಿತಿ ಪಡೆದ ಗುಪ್ತಚರ ದಳ ಮತ್ತು ರಾ ಅಧಿಕಾರಿಗಳು ದೇಶದಲ್ಲಿರುವ ಪ್ರತಿಯೊಂದು ಸೇನಾ ನೆಲೆ ಮತ್ತು ವಾಯುನೆಲೆಗಳ ಭದ್ರತೆಯನ್ನು ಹೆಚ್ಚಿಸಿ ಹೈ -ಅಲರ್ಟ್ ಘೋಷಿಸಿವೆ.
ಇತ್ತೀಚೆಗೆ ಆಗ್ರಾ ಭಾರತೀಯ ವಾಯುನೆಲೆಯನ್ನು ಅನಧಿಕೃತವಾಗಿ ಪ್ರವೇಶಿಸುವವರನ್ನು ಗುಂಡಿಟ್ಟು ಹತ್ಯೆ ಮಾಡಲು ಭದ್ರತಾ ಪಡೆಗಳಿಗೆ ಅಧಿಕಾರ ನೀಡಲಾಗಿದೆ.