ಸೆಪ್ಟೆಂಬರ್ 11 ಮತ್ತು 12ರ ನಡುವಿನ ರಾತ್ರಿ ಮೂವರು ಆರೋಪಿಗಳು ವಿಜಯ್ ಆಟೋರಿಕ್ಷಾ ಬಾಡಿಗೆ ಹಿಡಿದು ಐಟಿಓದಿಂದ ಬುರಾರಿಗೆ ಪಯಣಿಸಿದ್ದರು. ದಾರಿ ಮಧ್ಯದಲ್ಲಿ ಮೂವರು ಸೇರಿ ಆಟೋ ಚಾಲಕನನ್ನು ಬೆದರಿಸಿ ಆತನ ಬಳಿ ಇದ್ದ 400 ರೂಪಾಯಿಗಳನ್ನು ಮತ್ತು ವಾಹನ ಚಾಲನಾ ಪರವಾನಿಗೆ ಪತ್ರವನ್ನು ಸಹ ದೋಚಿದ್ದರು. ಆತ ಸಹಾಯಕ್ಕಾಗಿ ಕೂಗಿ ಕೊಂಡಿದ್ದನ್ನು ಕೇಳಿದ ಹತ್ತಿರವೇ ಇದ್ದ ಪೊಲೀಸ್ ಠಾಣೆಯ ಪೇದೆಗಳು ಸಹಾಯಕ್ಕಾಗಿ ಧಾವಿಸಿದಾಗ ಬಾಲಕ ಸಿಕ್ಕಿ ಬಿದ್ದಿದ್ದ. ಆತನ ಸಹಾಯದಿಂದ ಎರಡು ದಿನಗಳ ಬಳಿಕ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.