ಅವರ ಈ ಹೇಳಿಕೆಯ ವಿರುದ್ಧ ಕೆಂಡಾಮಂಡಲವಾಗಿರುವ ಸೇನೆ 'ಉದ್ಧವ್ರಲ್ಲಿ ಅನುಭವದ ಕೊರತೆ ಇದೆ ಎಂದು ಮಹಾರಾಷ್ಟ್ರ ಸಿಎಂ ಹೇಳುತ್ತಾರೆ. ಅವರು ಮುಖ್ಯಮಂತ್ರಿಯಾದಾಗ ಯಾವ ಅನುಭವವನ್ನು ಹೊಂದಿದ್ದರು? ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯಲು ಅವರಿಗೆ ಸುರಕ್ಷಿತ ಕ್ಷೇತ್ರ ಸಿಗುತ್ತಿಲ್ಲದ ಕಾರಣಕ್ಕೆ ಅವರ ಮಾನಸಿಕ ಸ್ಥಿತಿ ತೀವೃ ನಿಗಾ ಘಟಕದಲ್ಲಿರುವ ರೋಗಿಯಂತೆ ಅಸ್ಥಿರವಾಗಿದೆ' ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಪುಟದಲ್ಲಿ ಕಿಡಿ ಕಾರಿದೆ.