ಎರಡು ತಿಂಗಳ ಹಿಂದೆ ಯುವತಿ ಬಯಲಿನಲ್ಲಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಅದೇ ಗ್ರಾಮದ ಯುವಕ ಮುಲ್ಚಂದ್ ಫೋಟೋ ತೆಗೆದಿದ್ದ. ಆ ಫೋಟೋವನ್ನು ಬುಧವಾರ ಗ್ರಾಮದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಇತರರಿಗೆ ತೋರಿಸಿದ್ದ. ಈ ಸುದ್ದಿ ಊರಿನಲ್ಲೆಲ್ಲ ಹರಿದಾಡಿ ವ್ಯಾಪಕ ಚರ್ಚೆಯಾಗ ತೊಡಗಿತು. ಕೆಲವು ಜನರು ಯುವತಿಯ ಕುಟುಂಬದವರನ್ನು ಕಂಡಾಗ ಕೊಂಕು ಮಾತಾಡಲು ಸಹ ಪ್ರಾರಂಭಿಸಿದ್ದಾರೆ.