ಗ್ವಾಲಿಯರ್ನ ಎಮ್ಐಟಿಎಸ್ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದ ಸುರುಭಿ ಕಮಥನ್ ತನ್ನ ಕುಟುಂಬದ ಸದಸ್ಯರ ಜತೆಯಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಳು. ಭಾರತದ ಜಯಕ್ಕಾಗಿ ದೇವರಿಗೆ ಪೂಜೆ ಮಾಡಿ ಮನೆಯವರಿಗೆಲ್ಲ ಆಕೆ ಪ್ರಸಾದವನ್ನು ನೀಡಿದ್ದಳು. ಆದರೆ ಧೋನಿ ಪಡೆ ಸೋತಾಗ ವಿಪರೀತ ಬೇಸರ ವ್ಯಕ್ತ ಪಡಿಸಿದ್ದ ಯುವತಿ ಶುಕ್ರವಾರ ಬೆಳಿಗ್ಗೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.