ಮದ್ಯ ಕುಡಿದುಕೊಂಡು ಬಂದ ವರನನ್ನು ತಿರಸ್ಕರಿಸಿದ ವಧು

ಸೋಮವಾರ, 18 ಏಪ್ರಿಲ್ 2016 (14:39 IST)
ವಧುವೊಬ್ಬಳು ಮದುವೆ ಮಂಟಪಕ್ಕೆ ಮದ್ಯದ ಅಮಲಿನಲ್ಲಿಯೇ ಬಂದ ವರನನ್ನು ತಿರಸ್ಕರಿಸಿ ದಿಬ್ಬಣವನ್ನು ಹಿಂತಿರುಗುವಂತೆ ಮಾಡಿದ ಅಪರೂಪದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ಮದುವೆಪೂರ್ವ ಆಚರಣೆಗಳು ಸಂಪನ್ನಗೊಂಡ ಮೇಲೆ ವರ ರೂಪ್ ಸಿಂಗ್‌ನನ್ನು ಹೂಮಾಲೆ ವಿನಿಮಯ ಮಾಡಿಕೊಳ್ಳಲು ಮಂಟಪಕ್ಕೆ ಕರೆತರಲಾಯಿತು. ಇನ್ನೇನು ಮಾಲೆ ಹಾಕಬೇಕೆಂದುಕೊಂಡಾಗ ವಧು ಸಪ್ನಾ ವರ ಮದ್ಯದ ಅಮಲಿನಲ್ಲಿರುವುದನ್ನು ಕಂಡುಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಅವಳು ಆತನ ಜತೆ ಮದುವೆಯಾಗಲಾರೆ ಎಂದು ದಿಟ್ಟತನದ ನಿರ್ಧಾರವನ್ನು ಪ್ರಕಟಿಸಿದ್ದಾಳೆ.
 
ಅವರ ಈ ಧೈರ್ಯವನ್ನು ನೋಡಿ ಶಿವಪುರಿಯ ರಾಜನಗರದ ಗ್ರಾಮಸ್ಥರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.
 
ದಿಬ್ಬಣ ಹಿಂತಿರುಗಿ ಹೋಯಿತು. ಆದರೆ ಸಾಮಾಜಿಕ ಒತ್ತಡದ ಹಿನ್ನೆಲೆಯಲ್ಲಿ ವಧು ಪಕ್ಕದ ಊರಿನ ಅರವಿಂದ್ ಎಂಬುವವರ ಜತೆ ಮದುವೆಯಾದಳು.
 
ಏತನ್ಮಧ್ಯೆ ವರ ನಿಜಕ್ಕೂ ಕುಡಿದಿರಲಿಲ್ಲ. ಆದರೆ ಆತನಿಗೆ ವಧು ಇಷ್ಟವಿಲ್ಲದ ಕಾರಣ ಕುಡಿದವರ ಹಾಗೆ  ನಾಟಕವಾಡಿದ ಎಂಬ ಸತ್ಯ ಹೊರಬಿದ್ದಿದೆ. ಹೀಗಾಗಿ ವಧುವಿನ ಕುಟುಂಬದವರು ಆತನನ್ನು ತಮ್ಮ ಜತೆ ಎಳೆದೊಯ್ದಿದ್ದಾರೆ. ಈಗಲೂ ವರ ರೂಪ್ ಸಿಂಗ್ ವಧುವಿನ ಮನೆಯವರ ವಶದಲ್ಲಿದ್ದಾನೆ. ಆದರೆ ತನ್ನ ಅಮಲಿನ ಅವಸ್ಥೆ ಮತ್ತು ಅದರ ಹಿಂದಿನ ಕಾರಣವನ್ನು ಮಾತ್ರ ಆತ ಬಾಯ್ಬಿಡುತ್ತಿಲ್ಲ. 
 

ವೆಬ್ದುನಿಯಾವನ್ನು ಓದಿ