ವುಮೆನ್ ಇನ್ ದಿ ವರ್ಲ್ಡ್ ಇಂಡಿಯಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಜ್ಮಿ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಕಳವಳಕಾರಿಯಾಗಿದೆ. ಇಂತಹ ದುಷ್ಟಶಕ್ತಿಗಳನ್ನು ಬಗ್ಗುಬಡಿಯಬೇಕು ಎನ್ನುವುದು ಪ್ರಸ್ತುತ ಚರ್ಚಾ ವಿಷಯವಲ್ಲ. ಇತರರನ್ನು ಸಮುದಾಯಗಳನ್ನು ಗೌರವಿಸಬೇಕು ಎನ್ನುವುದು ಚರ್ಚಾ ವಿಷಯವಾಗಿದೆ ಎಂದು ಹೇಳಿದ್ದಾರೆ.
ದೇಶದ ಹಲವಾರು ಕಲಾವಿದರು ಸಾಹಿತಿಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಧ್ವನಿ ಎತ್ತಿದ್ದಾರೆ. ದಾದ್ರಿ ಘಟನೆಯ ನಂತರ ಅನೇಕ ಕಲಾವಿದರು, ಸಾಹಿತಿಗಳು ತಮಗೆ ದೊರೆತ ರಾಷ್ಟ್ರ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ ಎಂದು ಬಾಲಿವುಡ್ ನಟ ಶಬನಾ ಆಜ್ಮಿ ಹೇಳಿದ್ದಾರೆ.