ಪಟೇಲ್ ಸಮುದಾಯಕ್ಕೆ ಸೇರಿದ ತೊಗಾಡಿಯಾ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡದಿರುವುದು, ಅಭಿವೃದ್ಧಿಗೆ ಮನ್ನಣೆ ನೀಡದಿರುವುದು ಹಾಗೂ ಸಾಲದ ಬಾಧೆಯಿಂದ ಕಂಗಾಲಾದ ರೈತರಿಗೆ ಸಾಂತ್ವನ ಹೇಳದಿರುವುದು ಗುಜರಾತ್ ಸರಕಾರದ ವೈಫಲ್ಯಗಳಾಗಿವೆ ಎಂದು ಹೇಳಿದ್ದಾರೆ.
ವಿಶ್ವ ಹಿಂದು ಸಮಾಚಾರ ಪತ್ರಿಕೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದ ಅವರು, ಗುಜರಾತ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ದೇಶಕ್ಕೆ ಕಳವಳಕಾರಿಯಾಗಿದ್ದು ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.