ಪಾಕ್ ಧ್ವಜ ಸುಟ್ಟು ಹಾಕಿದ ಶಿವಸೇನೆ

ಮಂಗಳವಾರ, 28 ಜುಲೈ 2015 (16:50 IST)
ಗುರುದಾಸಪುರದ ದೀನಾ ನಗರದಲ್ಲಿ ನಡೆದ ಪಾಕ್ ಪ್ರಚೋದಿತ ಉಗ್ರರ ದಾಳಿಯನ್ನು ಖಂಡಿಸಿ ಶಿವಸೇನೆ ಕಾರ್ಯಕರ್ತರು ಪಾಕ್ ಧ್ವಜವನ್ನು ಸುಟ್ಟು ಹಾಕಿದ್ದಾರೆ. 
 
ಪಕ್ಷದ ರಾಜ್ಯ ಉಪಾಧ್ಯಕ್ಷ ಇಂದ್ರಜಿತ್ ಖರ್ವಾಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಿಂದಾಗಿ ಭಾರತ- ಪಾಕ್ ನಡುವೆ ಸಂಚರಿಸುವ ಸದಾ-ಈ-ಸರ್ಹದ್ ಬಸ್‌ ಮಾರ್ಗವನ್ನು ಅಧಿಕಾರಿಗಳು ಬದಲಾಯಿಸುವಂತಾಯಿತು.
 
ಪೊಲೀಸರ ಪ್ರಕಾರ ಪ್ರತಿಭಟನೆಗೂ ಮುನ್ನ ನವದೆಹಲಿಯಿಂದ ಲಾಹೋರ್‌ಗೆ ಸಾಗುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿ 1 ರಿಂದ ನಿರಾತಂಕವಾಗಿ ಸಾಗಿತು. ಆದರೆ ಲಾಹೋರ್‌ನಿಂದ ನವದೆಹಲಿಗೆ  ಬರುತ್ತಿದ್ದ ಬಸ್ ಮಾರ್ಗವನ್ನು ನಿಯಮಿತವಾಗಿ ಸಾಗುತ್ತಿದ್ದ ಫಗ್ವಾರಾ ಮಾರ್ಗದ ಬದಲಾಗಿ ಕರ್ತಾರ್ಪುರದಿಂದ ನಾಕೋದರ್, ನೂರ್ ಮಹಲ್ ಮಾರ್ಗವಾಗಿ  ಫಿಲ್ಲೌರ್  ಬಳಿ ರಾಷ್ಟ್ರೀಯ ಹೆದ್ದಾರಿ 1ಕ್ಕೆ ತರಲಾಯಿತು. 
 
ಪಾಕ್ ಮತ್ತು ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗುತ್ತ ರಾಷ್ಟ್ರೀಯ ಹೆದ್ದಾರಿಯಲ್ಲೂ ಪ್ರತಿಭಟನೆ ನಡೆಸಿದ ಶಿವಸೇನಾ ಕಾರ್ಯಕರ್ತರು ರಸ್ತೆಯಲ್ಲಿ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಆಗಲು ಕಾರಣರಾದರು. 

ವೆಬ್ದುನಿಯಾವನ್ನು ಓದಿ