ಗುಮ್ಮಟದ ಕೆಳಗಿದ್ದ ಪ್ರದೇಶ ಬಾಲರಾಮನ ಕೃಪೆಗೊಳಪಟ್ಟಿತ್ತು. ಬಿಜೆಪಿ ನಾಯಕರ ನೇತೃತ್ವದಲ್ಲಿದ್ದ ಗುಂಪು ಮಸೀದಿಯನ್ನು ನಾಶಗೊಳಿಸಿತು. ಮುಸ್ಲಿಮ್ ಸಮುದಾಯದವರು ನಮಾಜ್ ಮಾಡಲು ಬಳಸುತ್ತಿದ್ದ ಮಸೀದಿಯ ಭಾಗ ಗುಮ್ಮಟದ ಕೆಳಗಿತ್ತು. ಆದರೆ ಅವರು ಸಂಪೂರ್ಣ ಕಟ್ಟಡವನ್ನು ನಾಶಗೊಳಿಸಿದರು. ಹೀಗಾಗಿ ಅವರು ಮಸೀದಿ ಮತ್ತು ದೇವಸ್ಥಾನ ಎರಡನ್ನು ನಾಶ ಮಾಡಿದಂತಾಯಿತು. ಅದಕ್ಕಾಗಿ ಅವರಿಗೆ ಶಿಕ್ಷೆಯಾಗಬೇಕು. ಹಿಂದೂಗಳ ಹಿತಾಸಕ್ತಿಗಳನ್ನು ನಾವು ಪ್ರತಿನಿಧಿಸುತ್ತೇವೆ ಎಂದು ಅವರು ಹೇಳುತ್ತಾರೆ . ಆದರೆ ದೇವಸ್ಥಾನವನ್ನೇ ನೆಲಸಮಗೊಳಿಸಿದರು ಎಂದು ಅಖಿಲ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪ್ರಾಣಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.